ಕಲ್ಪನೆಯೆಂಬ ಬೀಜ
ಆಲೋಚನೆಗಳ ಬೀಜ ಮತ್ತು ಮನುಷ್ಯನ ಬೆಳವಣಿಗೆ ಮನುಷ್ಯನು ಒಂದು ವಿಶೇಷ ಜೀವಿ. ಅವನಿಗೆ “ಸಂಘಜೀವಿ” ಎನ್ನುವ ಪರಿಕಲ್ಪನೆ ಇದೆ. ಅಂದರೆ, ಅವನು ಸಮಾಜದಲ್ಲಿ ಇತರರ ಜೊತೆ ಬದುಕುತ್ತಾನೆ. ಆದರೆ ಅವನ ಜೊತೆ ಇರುವ ಪ್ರತಿಯೊಬ್ಬರೂ ಒಂದೇ ರೀತಿಯಲ್ಲಿ ಯೋಚಿಸುವುದಿಲ್ಲ. ಪ್ರತಿಯೊಬ್ಬರ ಯೋಚನೆ, ಕಲ್ಪನೆ, ಮನಸ್ಸಿನ ರೀತಿ ಬೇರೆಬೇರೆ ಆಗಿರುತ್ತದೆ. ಆದರೂ ಒಂದು ವಿಷಯ ಸಾಮಾನ್ಯ—ಪ್ರತಿಯೊಬ್ಬ ಮನುಷ್ಯನು ಯೋಚಿಸುತ್ತಾನೆ, ಕಲ್ಪಿಸುತ್ತಾನೆ. ಮನುಷ್ಯನ ಮೆದುಳು ಒಂದು ಭೂಮಿಯಂತಿದೆ. ಭೂಮಿಯಲ್ಲಿ ಬಿದ್ದ ಬೀಜಗಳು ಹೇಗೆ ಚಿಗುರೊಡೆದು ಮರಗಳಾಗುತ್ತವೆಯೋ, ಹಾಗೆಯೇ ನಮ್ಮ ಮೆದುಳಿನಲ್ಲಿ ಪ್ರತಿದಿನ ಅನೇಕ ಆಲೋಚನೆಗಳು ಮತ್ತು ಕಲ್ಪನೆಗಳು ಬೀಜಗಳಂತೆ ಹುಟ್ಟುತ್ತಿರುತ್ತವೆ. ಆದರೆ ಭೂಮಿಯಲ್ಲಿನ ಎಲ್ಲಾ ಬೀಜಗಳು ಬೆಳೆಯುವುದಿಲ್ಲ. ಕೆಲವು ಬೆಳೆಯುತ್ತವೆ, ಕೆಲವು ಕೊಳೆಯುತ್ತವೆ. ಇದೇ ನಿಯಮ ನಮ್ಮ ಆಲೋಚನೆಗಳಿಗೂ ಅನ್ವಯಿಸುತ್ತದೆ. ನಮ್ಮ ಆಲೋಚನೆಗಳು ಸಾಮಾನ್ಯ ಬೀಜಗಳಲ್ಲ. ಅವು ಕಣ್ಣಿಗೆ ಕಾಣದ ತರಂಗಗಳು. ನಾವು ನೋಡುವುದು, ಕೇಳುವುದು, ಅನುಭವಿಸುವುದು—ಎಲ್ಲವೂ ಸೇರಿ ಈ ತರಂಗಗಳನ್ನು ಹುಟ್ಟಿಸುತ್ತವೆ. ನಂತರ ನಮ್ಮ ಮೆದುಳು ಮತ್ತು ಮನಸ್ಸು ಅವುಗಳ ಮೇಲೆ ಕೆಲಸ ಮಾಡುತ್ತವೆ. ಅವುಗಳನ್ನು ಪರೀಕ್ಷಿಸುತ್ತವೆ, ವಿಶ್ಲೇಷಿಸುತ್ತವೆ, ಬೆಳೆಯಲು ಪ್ರಯತ್ನಿಸುತ್ತವೆ. ಮೆದುಳು ಸದಾ ಹೇಳುತ್ತದೆ: “ಈ ಕಲ್ಪನೆಯನ್ನು ಹೊರ ಜಗತ್ತಿನಲ್ಲಿ ಪ್ರಯೋಗಿಸಿದರೆ ಅದು ಜೀವನದಲ್ಲಿ ಫಲ ನೀಡಬಹು...